ಹೊಸ ಹಾಡು

ಹಾಡೆಲೆ ಹೃದಯದ ಹಕ್ಕಿಯೆ ಹಾಡು
ನವ ಜೀವನ ಸುಮಧುರ ಗಾನ
ಕೊರಡು ಕೊನರುತಿದೆ ಚೆಲುವು ಹರಡುತಿದೆ
ಉದಿಸಲಿ ಚೇತನ ತಂತಾನ

ರಾತ್ರಿ ಸರಿಯುತಿದೆ ಉಷೆಯು ಬರುತಲಿದೆ
ಓಹೋ ಎಂಥಹ ಸುರ ಚೆಲುವು
ಇದನ್ನು ಕಾಣಲು ಉಂಡದ್ದಾಯಿತು
ಓ ಹಾ ಇರುಳಿನ ಕಡು ನೋವು

ಜಗವೆ ಸುಂದರಾ ಬಾಳು ಸುಂದರಾ
ಕಾಣೋ ನಗುತಿಹ ಸೃಷ್ಟಿಯನು
ನೀನೂ ಕೂಡಾ ಅದರ ಚೆಲುವಿನಲಿ
ಕೂಡುತ ಹಾಡೋ ತುಷ್ಟಿಯನು

ಕೋಶ ಕೀಟದೊಲು ಬಾಳಿದ್ದಿನ್ನೂ
ಸಾಕಾಗಿಲ್ಲವೆ ಮಹರಾಯ
ಚೆಲ್ಲುತ ಹೊದಿಕೆಯ ಮೇಲೆದ್ದೇಳು
ಸೊಬಗನು ಸವಿಯುವ ಬಾರಯ್ಯ

ಹೊತ್ತು ಮುಳುಗುವಾ ಅಂಜಿಕೆಯೇಕೆ
ಹಗಲನು ನಗುತಲೆ ಕಳೆಯೋಣ
ಕತ್ತಲಾದರೂ ರವಿಯು ಸಾಯುವನೆ
ಭೂಮಿಯ ಭ್ರಮೇಯೇ ತಾ ಕಾರಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮನ ಆತಂಕಗಳು
Next post ಲಿಂಗಮ್ಮನ ವಚನಗಳು – ೬೦

ಸಣ್ಣ ಕತೆ

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

cheap jordans|wholesale air max|wholesale jordans|wholesale jewelry|wholesale jerseys